ಪಾಲಕ್ಕಾಡ್ ಜಿಲ್ಲೆಯ ಹಳ್ಳಿ ಎರುಮಯೂರಿನಲ್ಲಿ ಕಂಡ ಪುಟ್ಟ ರಚನೆಗಳಿವು. ಚಿಕ್ಕ ಕಣಿಗಳಲ್ಲಿ ನೀರನ್ನು ತಡೆದು ನಿಲ್ಲಿಸಲು ಈ ರೈತ ಬಳಸಿದ ಉಪಾಯ ನೋಡಿ.
ಸಾಮಾನ್ಯವಾಗಿ ಇಂಥ ಪುಟ್ಟ ತಡೆಗಟ್ಟಕ್ಕೆ ಅಡಿಕೆ ಮರದ ಸಲಿಕೆ ಅಥವಾ ಗಿಡಮರಗಳ ಗೆಲ್ಲು ಅಥವಾ ಬರೇ ಮಣ್ಣು ಬಳಸುವುದು ವಾಡಿಕೆ. ಆದರೆ ಇವರು ಮರಳ ಚೀಲಕ್ಕೆ ಮಣ್ಣು / ಮರಳು ತುಂಬಿ ಸುಲಭದಲ್ಲಿ ಈ ರಚನೆ ಮಾಡಿಕೊಂಡಿದ್ದಾರೆ.
ಕೇರಳದಲ್ಲಿ ವಾಸಿಸುವ ಕನ್ನಡ ಪತ್ರಕರ್ತ. ಅದಕ್ಕೂ ಮೊದಲು ಕೃಷಿಕ.ಶ್ರೀಸಾಮಾನ್ಯರ ಮಳೆಕೊಯ್ಲಿನ ಯಶೋಗಾಥೆಗಳನ್ನು ದಾಖಲಿಸಿ ಮರಳಿ ಮಾಧ್ಯಮಗಳ ಮೂಲಕ ಅವರಿಗೆ ತಲಪಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಮಳೆಕೊಯ್ಲಿನ ಅ.ಆ.ಇ.ಈ ಕಲಿತದ್ದು ಜನವಿಶ್ವವಿದ್ಯಾಲಯ (ಪೀಪಲ್ಸ್ ಯುನಿವರ್ಸಿಟಿ)ಯಿಂದ.